ಮೆಡಿಕಲ್ ಕಾಲೇಜ್ ಗೆ ಆಗ್ರಹಿಸಿ ಕರ್ನಾಟಕ ರಕ್ಷಣೆ ವೇದಿಕೆ ಸಂಘಟನೆಯಿಂದ ಪ್ರತಿಭಟನೆ ನಡೆಸಿವೆ ರಸ್ತೆ ತಡೆದು ಸಿಎಂ ಕುಮಾರಸ್ವಾಮಿ ವಿರುದ್ದ ಕಾರ್ಯಕರ್ತರು ದಿಕ್ಕಾರ ಕೂಗಿದ್ದಾರೆ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ. ಸಿಎಂ ಕುಮಾರಸ್ವಾಮಿ ಅವರ ಅಣಕು ಶವದ ಮುಂದೆ ಬಾಯಿ ಪಡೆದುಕೊಂಡ, ದಿಕ್ಕಾರ ಕೂಗಿ ಆಕ್ರೋಶ್ ವ್ಯಕ್ತಪಡಿಸಿದ್ದಾರೆ
ಕೂಡಲೇ ಜಿಲ್ಲೆಗೆ ನೀಡಿದ ಮೇಡಿಕಲ್ ಕಾಲೇಜ್ ಮಂಜೂರಾತಿಗೆ ಆಗ್ರಹ...
ಆ್ಯಂಕರ್: ಭೀಮಾತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣವನ್ನು ಒಂದು ವಾರ ಸ್ಥಳೀಯ ಪೊಲೀಸರು ತನಿಖೆ ನಡೆಸಿ, ಇದೀಗ ನಮ್ಮ ಸುಪರ್ದಿಗೆ ಕೇಸ್ ನ್ನು ಹಸ್ತಾಂತರಿಸಿದ್ದಾರೆ ಎಂದು ಸಿಐಡಿ ಎಡಿಜಿಪಿ ಚರಣ ರೆಡ್ಡಿ ಹೇಳಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾರೇ ಭಾಗಿ ಆಗಿದರೂ ಅವರನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆ ನಡೆಸ್ತೇವೆ ಎಂದರು. ಅಲ್ಲದೇ, ಚಡಚಣ ಪಿಎಸ್ಐ ಗೋಪಾಲನ ಹಳ್ಳೂರ್ ಸೇರಿದಂತೆ ಮೂವರು ಪೇದೆಗಳು ಆರೋಪಿ ಎಂಬುದು ಸಾಭೀತಾಗಿದೆ. ಇನ್ನು ಭೀಮಾತೀರದ ಹಂತಕ ಮಹದೇವ ಸಾಹುಕಾರ ಎಲ್ಲಿದ್ದಾನೆ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆತನ ಬಂಧನಕ್ಕೂ ಬಲೆಬೀಸಲಾಗಿದೆ. ಸಾಹುಕಾರನ ಬಗ್ಗೆ ಮಾಹಿತಿ ಇದ್ರೆ ಸಿಐಡಿ ಅಧಿಕಾರಿಗಳಿಗೆ ಅಥವಾ ವಿಜಯಪುರ ಎಸ್ಪಿಗೆ ಮಾಹಿತಿ ನೀಡಲು ಮನವಿ ಮಾಡಿದರು. ಅಲ್ಲದೇ, ಐಜಿಪಿ ಅಲೋಕ ಕುಮಾರ ರಜೆ ವಿಚಾರಕ್ಕೆ ಉತ್ತರಿಸಿದ ಸಿಐಡಿ ಎಡಿಜಿಪಿ ಚರಣರೆಡ್ಡಿ, ನಾನು ಅವರು ಜೊತೆಗೆ ಮಾಡನಾಡಿದ್ದೇನೆ. ಅವರು ಪೂರ್ಣ ನಿಯೋಜಿತವಾಗಿ 10 ದಿನ ರಜೆ ಹಾಕಿದ್ದಾರೆ ಎಂದರು. ಇನ್ನು ಗಂಗಾಧರ ಹತ್ಯೆಯು ತನಿಖೆ ಹಂತದಲ್ಲಿದೆ. ಇದರ ಬಗ್ಗೆ ಹೇಳುವುದು ತಪ್ಪಾಗುತ್ತದೆ ಎಂದರು
...
https://www.youtube.com/watch?v=XsH-7IhkjoQ
ಮಂಗಳೂರು: ಹಿಂದು ಯುವತಿಯನ್ನು ಯಾಮಾರಿಸಿ ಮದುವೆಯಾದ ಮುಸ್ಲಿಂ ಯುವಕನಿಗೆ ಪತ್ನಿಯೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಂಗಳೂರಿನ ತೊಕ್ಕೊಟ್ಟು ಬಳಿಯ ಕುಂಪಲದಲ್ಲಿ ನಡೆದಿದೆ. ಸುಳ್ಯ ಮೂಲದ ಸಯ್ಯದ್ ಎಂಬಾತ ತನ್ನ ಹೆಸರನ್ನು ಅರುಣ್ ಪೂಜಾರಿ ಎಂದು ಹೇಳಿಕೊಂಡು ಪರಿಚಯಿಸಿ, ಎರಡು ವರ್ಷದ ಹಿಂದೆ ಕುಂಪಲದ ಹುಡುಗಿಯನ್ನು ಮದುವೆಯಾಗಿದ್ದ. ಮಂಗಳೂರಿನ ಮಾಲ್ ವೊಂದರಲ್ಲಿ ಕೆಲಸಕ್ಕಿದ್ದ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಸಯ್ಯದ್, ಗೆಳೆತನ ಸಾಧಿಸಿದ್ದ. ಆದರೆ, ಆರು ತಿಂಗಳ ಹಿಂದೆ ಹುಡುಗ ಮುಸ್ಲಿಂ ಅನ್ನೋದು ಪತ್ನಿಗೆ ಗೊತ್ತಾಗಿ ಇಬ್ಬರೂ ಬೇರೆಯಾಗಿದ್ದರು. ಇಂದು ಮತ್ತೆ ಪತ್ನಿ ಮನೆಗೆ ಆಗಮಿಸಿದ ಸಯ್ಯದ್ ನನ್ನು ಪತ್ನಿ ಮತ್ತು ಆಕೆಯ ತಂಗಿ ಸೇರಿ ಹಿಡಿದು ಥಳಿಸಿದ್ದಾರೆ. ಬಳಿಕ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸಯ್ಯದ್ ಈ ಹಿಂದೆ ಸುಳ್ಯದಲ್ಲಿಯೂ ಮದುವೆಯಾಗಿದ್ದ ಅಂತ ತಿಳಿದುಬಂದಿದೆ
...
https://www.youtube.com/watch?v=oRZf_1uNfHE
ಡಿಕೆಶಿಗೆ ಎರಡು ಮಹತ್ವದ ಹುದ್ದೆ: ವಿನಯ್ ಗುರೂಜಿ ಭವಿಷ್ಯ
ಚಾಮರಾಜನಗರ: ಡಿ.ಕೆ.ಶಿವಕುಮಾರ್ ಅವರಿಗೆ ಮಹತ್ವದ ಎರಡು ಹುದ್ದೆಗಳು ದೊರೆಯಲಿವೆದೆ. ಇನ್ನೂ ಅವರ ಪರೀಕ್ಷಾ ಸಮಯ ಮುಗಿದಿಲ್ಲ. ಅವರಿಗೆ ಇನ್ನೂ ಎರಡು ಪರೀಕ್ಷೆಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಹುದ್ದೆ ಸಿಗಲಿದೆ. ಅವರಿಗೆ ಗುರು ಭಕ್ತಿ ಇದೆ. ಅವರನ್ನ ಆ ಭಗವಂತ ಕೈ ಬಿಟ್ಟಿಲ್ಲ ಎಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಗೌರಿ ಗದ್ದೆ ಅವಧೂತ ದತ್ತ ಪೀಠದ ವಿನಯ್ ಗುರೂಜಿ ಹೇಳಿದರು.
#DKShivakumar #VinayGuruji #Portfolio D.k.shivakumar #Congres #BJP #JDS
...
https://www.youtube.com/watch?v=Ty9nTSQEI4A